ಚಿಕ್ಕಮಗಳೂರು ತಾಲ್ಲೂಕು ಆವತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಯು.ಎಂ. ಜಯರಾಮೇಗೌಡ ಮತ್ತು ಉಪಾಧ್ಯಕ್ಷರಾಗಿ ದೀಪ್ತಿ ಶಂಕರ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಅಧಿಕಾರಿ ಕಲ್ಲೇಶಪ್ಪ ಚುನಾವಣಾ ಪ್ರಕ್ರಿಯೆಗಳನ್ನು ಗೊಳಿಸಿದರು.
ನಿರ್ದೇಶಕರಾದ ರವೀಶ್ ಎ.ಎನ್, ಉಮೇಶ್ ಹೆಚ್ ಟಿ, ಪ್ರಕಾಶ್ ಬಿ ಆರ್, ಸಿದ್ದಾಂತ್, ಉಲ್ಲಾಸ್, ಕವೀಶ್ ,ಎ.ಎನ್ ವಿಜಯೇಂದ್ರ, ವೆಂಕಟೇಶ್, ಬಿ.ಬಿ ಮಂಜುನಾಥ್, ಸಿಇಓ ಶರತ್ ಸಾಲಿಯಾನ್,
ಆವತಿ ಬಿಜೆಪಿ ಹೋಬಳಿ ಘಟಕದ ಅಧ್ಯಕ್ಷ ಕೆರೆಮಕ್ಕಿ ಮಹೇಶ್, ತಾಲ್ಲೂ ಕು ಪಂಚಾಯಿತಿ ಮಾಜಿ ಅಧ್ಯಕ್ಷ ಎನ್ಎಂ ಮಂಜುನಾಥ್, ಮುಖಂಡರಾದ ರಘುನಾಥ್, ಶಶಿಧರ್ ,ನವೀನ್ ಬಿಸಿ, ಪ್ರಕಾಶ್ ,ಬಿ ಎಂ ರಮೇಶ್, ಗೋಕುಲ್,ಎಡಿ ರಮೇಶ್, ಅರವಿಂದ್, ಇದ್ದರು.



