ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯ ನಿಡುವಾಳೆ ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಅಖಂಡ ಭಜನಾ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು.
ಶ್ರೀ ಕ್ಷೇತ್ರದ ಆಡಳಿತದಾರರಾದ ಸುನೀಲ್ ಜೆ ಗೌಡ ಹಾಗೂ ಶ್ವೇತಾ ಗೌಡ ದಂಪತಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು

ಮಹಮ್ಮಾಯಿ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ, ಮಹಾಲಿಂಗೇಶ್ವರ ಭಜನಾ ಮಂಡಳಿ ಚೆಂಡ್ತಿಮಾರ್ ಬಂಟ್ವಾಳ, ಕೆಳಗೂರು ಕೃಷ್ಣ ಭಟ್ ಮತ್ತು ತಂಡ , ನಿಡುವಾಳೆ ರಾಮೇಶ್ವರ ಭಜನಾ ಮಂಡಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿವಿಧ ಕ್ಷೇತ್ರದ ಸಾಧಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಧಾರ್ಮಿಕ ಕ್ಷೇತ್ರದಿಂದ ಮೋಹನ್ ಎಂ ಬಾಳೂರು, ಕಲೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಿಂದ ರವಿ ರೈ ಕಳಸ, ಶೈಕ್ಷಣಿಕ ಕ್ಷೇತ್ರದಿಂದ ಶ್ರೀಮತಿ ಸುಮಿತ್ರಾ ಭಂಡಾರಿ ನಿಡುವಾಳೆ, ಸಂಘಟನಾ ಕ್ಷೇತ್ರದಿಂದ ಫೆಲಿಕ್ಸ್ ವಿಲಿಯಂ ಮಿನೇಜಸ್ ವಾಟೇಖಾನ್, ಸಂಗೀತ ಕ್ಷೇತ್ರದಿಂದ ಬಕ್ಕಿ ಮಂಜುನಾಥ್, ಸಮಾಜಸೇವಾ ಕ್ಷೇತ್ರದಿಂದ ರವೀಂದ್ರ ಅಂಬುಲೆನ್ಸ್ ಚಾಲಕರು, ಬಣಕಲ್ ರವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪಕ ಎನ್ ಆರ್ ನಾಗರಾಜ್ ಭಟ್ , ಅರ್ಚಕ ನಾಗೇಂದ್ರ ಕಾರಂತ್ , ದಿನಕರ ಭಟ್ , ಕ್ಷೇತ್ರ ಸಿಬ್ಬಂದಿ ಸೂರ್ಯನಾರಾಯಣ , ಸ್ಥಳಿಯರಾದ ಸುರೇಶ್ , ಜಯಂತ್ , ರತ್ನಾಕರ್ , ಎ ಎಸ್ ಸೀನಾ , ಸಂತೋಷ್ ಸಾಲ್ಯಾನ, ದರ್ಶನ್ , ಕಿಶೋರ್ , ದಿಲೀಪ್ , ಭೋಬೆಗೌಡ, ವೀಣಾ ಭಟ್ , ಸೌಮ್ಯ, ಲಲಿತಾ , ಗೀತಾ , ಭೇಬಿ , ನೀಲ, ಸಂತೋಷ್ ಸಾಲ್ಯಾನ್ ಮುಂತಾದವರು ಇದ್ದರು.



