ದೈಹಿಕ ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕುವೆಂಪು ಯುನಿವರ್ಸಿಟಿ ಗೆ ದ್ವಿತೀಯಾ ರ್ಯಾಂಕ್ ಪಡೆದಿರುವ ಮೂಡಿಗೆರೆ ತಾಲೂಕು ಬಣಕಲ್ ಹೋಬಳಿ ಬೆಟ್ಟಗೆರೆ ಗ್ರಾಮದ ಪ್ರಖ್ಯಾತ. ಬಿ. ಪಿ. ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅವರ ಮನೆಯಲ್ಲಿ ಅಭಿನಂದಿಸಲಾಯಿತು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕುಮಾರ್ ಕೋಳೂರು ಮಾತನಾಡಿ ಇವರ ಸಾಧನೆ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿ.ತಾಲೂಕಿನ ಯುವ ಕ್ರೀಡಾ ಪಟುಗಳಿಗೆ ಪ್ರೇರಣೆ ಆಗಲೀ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ಅಧ್ಯಕ್ಷರಾದ ಲೋಕೇಶ್ ಬೆಟ್ಟಗೆರೆ ಮಾತನಾಡಿ ಶ್ರೀಮತಿ ನಿಂಗಮ್ಮ ಬೋಮ್ಮಯ್ಯ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶ್ರೀನಿವಾಸ ಸರ್ ಶಿಷ್ಯನಾಗಿ ಮೃದು ಸ್ವಭಾವದ ಪ್ರಖ್ಯಾತ್ ಶಿಕ್ಷಣದ ಜೊತೆಗೆ ಕಬ್ಬಡ್ಡಿ ಕ್ರೀಡೆಯಲ್ಲಿ ವಿಶ್ವವಿದ್ಯಾಲಯ ತಂಡದಲ್ಲಿ.ರಾಜ್ಯ ಮಟ್ಟದಲ್ಲಿ ನಮ್ಮ ಊರಿಗೆ ಕೀರ್ತಿ ತಂದಿದ್ದಾರೆ ಇವರ ಸಾಧನೆಯ ಹಾದಿಯಲ್ಲಿ ನಮ್ಮ ಊರಿನ ಮಕ್ಕಳು ಬೆಳೆಯಬೇಕು ಎಂದು ಶುಭಹಾರೈಸಿದರು.
ಮುಖಂಡರಾದ ಬಿ. ಎಂ. ಶಂಕರ್ ಮಾತನಾಡಿ ಭೈರವೇಶ್ವರ ಸ್ಪೋರ್ಟ್ಸ್ ಕ್ಲಬ್ ಸದಸ್ಯನಾಗಿ ಪ್ರಖ್ಯಾತ್ ನಮ್ಮ ಊರಿಗೆ ಕಬ್ಬಡಿ ಕ್ರೀಡೆಯ ಜೊತೆಗೆ . ಶಿಕ್ಷಣದಲ್ಲಿ ಸಾಧನೆ ಮಾಡಿದ ತಳ ಸಮುದಾಯ ಹುಡುಗ ಇವರು ನಮ್ಮ ಸಮುದಾಯಕ್ಕೆ ಮಾದರಿ ಆಗಬೇಕು ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ. ಮಗ್ಗಲಮಕ್ಕಿ ಗಣೇಶ್ ಕ. ಸಾ. ಪ ಜಿಲ್ಲಾ ಸಂಚಾಲಕರು .ಬಕ್ಕಿ ಮಂಜುನಾಥ ಜಿಲ್ಲಾ ಕ. ಸಾ. ಪ. ಕಾರ್ಯದರ್ಶಿಗಳು .ಬಣಕಲ್ ಹೋಬಳಿ ಕ. ಸಾ. ಪ.ಉಸ್ತುವಾರಿ. ವಸಂತ ಹಾರ್ಗೂಡ್ ಶಿಕ್ಷಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಟ್ಟಗೆರೆ ಒಕ್ಕೂಟ ಅಧ್ಯಕ್ಷರಾದ ಅರವಿಂದ ಗೌಡ್ರು. SDMC ಅಧ್ಯಕ್ಷರಾದ ಹೋನ್ನೇಶ್ ಬೆಟ್ಟಗೆರೆ . ಗುಡ್ಡಟ್ಟಿ ಶೇಖರ್. ಪ್ರವೀಣ್ ಶಾಲಿಯಾನ. ಬಿ.ಎಸ್. ನಿಂಗಯ್ಯ. ಗೋಪಾಲ. ಬಿ. ಎಂ. ರಮೇಶ್. ದೇವಮ್ಮ. ತಂದೆ ಪದ್ಮಯ್ಯ. ತಾಯಿ ಪಾರ್ವತಿ. ಅಣ್ಣ ಪ್ರಜ್ವಲ್. ತಂಗಿ ಪ್ರಾರ್ಥನಾ. ಮುಂತಾದವರು ಇದ್ದರು



