ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆ, ಆರಕ್ಷಕ ಇಲಾಖೆ, ನ್ಯಾಯಾಂಗ ಇಲಾಖೆ ಮತ್ತು ವಕೀಲರ ಸಂಘ ಮೂಡಿಗೆರೆ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಮೂಡಿಗೆರೆಯ ನಿರೀಕ್ಷಣ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆಯ ಅಧ್ಯಕ್ಷರಾದ ಮಗಲಮಕ್ಕಿ ಗಣೇಶ್ ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಪ್ರಕಾಶ್ ಪಿ. ಎಂ. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ, ಹಾಗೂ ಅಧ್ಯಕ್ಷರು, ತಾಲ್ಲೂಕು ಕಾನೂನು ಸೇವಾ ಸಮಿತಿ, ಮೂಡಿಗೆರೆ ಇವರು ನೆರವೇರಿಸಿದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹರ್ಷವರ್ಧನ್ ಸಬ್ ಇನ್ಸ್ ಪೆಕ್ಟರ್, ಆರಕ್ಷಕ ಠಾಣೆ, ಮೂಡಿಗೆರೆ, ಹೆಚ್.ಕೆ.ದೇವರಾಜ್, ಅಧ್ಯಕ್ಷರು, ವಕೀಲರ ಸಂಘ, ಮೂಡಿಗೆರೆ. ಶ್ರೀಮತಿ ಮೀನಾಕ್ಷಿ ಎನ್.ಎ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮೂಡಿಗೆರೆ. ಕೆ.ಬಿ. ಶ್ರೀನಿವಾಸ್ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಮೂಡಿಗೆರೆ. ಹಸೈನಾರ್, ಬಿಳಗುಳ ಉಪಾಧ್ಯಕ್ಷರು, ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಮೂಡಿಗೆರೆ. ಎಂ. ಎಂ. ರಾಘವೇಂದ್ರ, ಕಾರ್ಯದರ್ಶಿ, ವಕೀಲರ ಸಂಘ, ಮೂಡಿಗೆರೆ, ರಕ್ಷಿತ್ ಬಾಳೂರು, ಕಾರ್ಯದರ್ಶಿ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಮೂಡಿಗೆರೆ, ಇದ್ದರು
ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ದಳನಾಯಕರು ಹಾಜರಿದ್ದರು, ನಗರದದ್ಯಾoತ ರಸ್ತೆ ಸುರಕ್ಷಾ ಘೋಷಣೆಗಳನ್ನ ಕೂಗುವ ಮೂಲಕ ಪಟ್ಟಣದ ಲಯನ್ಸ್ ವರ್ತುಲಕ್ಕೆ ಬಂದು ನಗರದಲ್ಲಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೆ ಚಲಿಸುತ್ತಿದ್ದ ಚಾಲಕರಿಗೆ ಗುಲಾಬಿ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು.



