suddi-4 (2)

 

 

ಕಮಲದ ಚಿಹ್ನೆಯಡಿ ಉದಯಿಸಿದ ಭಾಜಪ, ಜಗತ್ತಿನ ಎದುರು ದೇ ಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಲವಾರು ಸವಾಲು ಹಾಗೂ ಏಳುಬೀಳಿನ ನಡುವೆಯೂ ಎ ದೆಗುಂದದೇ ರಾಷ್ಟ್ರದ ಏಕೀಕರಣಕ್ಕೆ ದುಡಿಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ 47ನೇ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಟಲ್‍ಜೀ ಹಾಗೂ ಅಡ್ವಾಣಿಜೀಯವರ ಸಾರಥ್ಯದಲ್ಲಿ ಮುನ್ನೆಲೆಗೆ ಬಂದ ಪಕ್ಷವು ಆರಂಭದಲ್ಲಿ ಬಹ ಳಷ್ಟು ಸಂಕಷ್ಟ ಎದುರಿಸಿತ್ತು. 1984ರ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನ ಬಿಜೆಪಿ ಪಡೆದುಕೊ ಂಡಿತು. ಕಾಲಕ್ರಮೇಣ ನಾಲ್ಕೈದು ವರ್ಷಗಳಲ್ಲೇ 1989ರಲ್ಲಿ ಚುನಾವಣೆಯಲ್ಲಿ 83 ಸ್ಥಾನ ವಿಜಯ ಸಾಧಿಸಿ, ನೂರರ ಗಡಿ ದಾಟುವ ಸಾಮಥ್ರ್ಯ ಬೆಳೆಸಿಕೊಂಡಿತು ಎಂದರು.

ಆಟಲ್‍ಜೀ ನೇತೃತ್ವದ ಬಿಜೆಪಿ 1993ರ ಇಸವಿಯಲ್ಲಿ 13 ದಿನಗಳ ಕಾಲ ದೇಶದ ಅಧಿಕಾರ ನಡೆಸಿತು. ನಂತರ ರಾಜಕೀಯ ಅಸೃಶ್ಯತೆ ಹಿನ್ನೆಲೆ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಆಟಲ್‍ಜೀ ರಾಜಕೀಯ ಅಸೃ ಶ್ಯತೆ ಬಗ್ಗೆ ಅದ್ಬುತ ಭಾಷಣ ನೀಡಿ ನಿರ್ಗಮಿಸಿದರು. 1998ರಲ್ಲೂ ಒಂದು ಮತದಿಂದ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ ದೃತಿಗೆಡಲಿಲ್ಲ ಎಂದು ಹೇಳಿದರು.

ಹಿಂದೆ ಬಿಜೆಪಿ ಅನೇಕ ಸವಾಲುಗಳನ್ನು ನಡುವೆ ಆಟಲ್‍ಜೀ ನೇತೃತ್ವದಲ್ಲಿ 1999ರಲ್ಲಿ ಆರು ವರ್ಷಗಳ ಕಾಲ ಅಧಿಕಾರ ನಡೆಸಿತು. ಈ ಆಡಳಿತ ವೈಖರಿಯಲ್ಲಿ ಕಳಂಕ ರಹಿತ, ಉತ್ತಮ ಸರ್ಕಾರ ಎಂಬುದನ್ನು ದೇಶ ಹಾಗೂ ಜಗತ್ತಿಗೆ ತಿಳಿಸಿಕೊಟ್ಟರು. ಸುವರ್ಣ  ಹೆದ್ದಾರಿ ನಿರ್ಮಿಸುವ ಮೂಲಕ ಅಭಿವೃದ್ದಿ ಮೈಲಿಗಲ್ಲನ್ನು ಕೊಡುಗೆ ನೀಡಿದವರು ಎಂದರು.

ರಾಷ್ಟ್ರ ನಿರ್ಮಾಣ ದೃಷ್ಟಿಯಿಂದ ಭಾಜಪ ಸರ್ವ ಶಿಕ್ಷಣ ಅಭಿಯಾನದಡಿ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ, ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಅಂದೇ ಕಲ್ಪಿಸಿಕೊಟ್ಟಿತು. ಪಿಎಂ ಗ್ರಾಮಸಡಕ್ ಯೋಜನೆ ಸೇರಿದಂತೆ ಅಭಿವೃಧ್ದಿಯಲ್ಲಿ ಬದಲಾವಣೆಗೆ ಆಟಲ್‍ಜೀ ಅವರು ತಮ್ಮದೇ ಸಾಮಥ್ರ್ಯ ತೋರಿಸಿದರು ಎಂದು ಹೇಳಿದರು.

ಬಿಜೆಪಿ ರಾಜಕೀಯ ಪಕ್ಷವಲ್ಲ, ರಾಷ್ಟ್ರೀಯ ಚಳುವಳಿ. ಬಿಜೆಪಿ ದೇಶದಲ್ಲಿ ಉಗಮಿಸದಿದ್ದಲ್ಲಿ ರಾಷ್ಟ್ರ ಚಿಂ ತನೆಗಳು ಮರೆಯಾಗುತ್ತಿದ್ದವು. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದರೂ, ರಾಷ್ಟ್ರೀಯ ಚಿಂ ತನೆಗೆ ಕೊಡಲಿಪೆಟ್ಟು ಹಾಕಿತು. ಕುಟುಂಬದ ಹಿತಾಸಕ್ತಿಗಾಗಿ ರಾಷ್ಟ್ರೀಯ ಹಿತಾಸಕ್ತಿ ಕಡೆಗಣಿಸಿದ ಪಕ್ಷವಾಗಿ ಕಾಂಗ್ರೆಸ್ ಬೆಳೆದುಕೊಂಡು ಬಂದಿತು ಎಂದರು.

ಬಿಜೆಪಿ ರಾಜಕೀಯ ತಂತ್ರಗಾರಿಕೆ, ಹೊಂದಾಣಿಕೆ ಮಾಡಿಕೊಂಡಿವೆ, ಹೊರತು ರಾಷ್ಟ್ರೀಯ ಹಿತಾಸಕ್ತಿ ಎಂದಿಗೂ ಕಡೆಗಣಿಸಿಲ್ಲ. ಭಾಜಪ ಎಂದಿಗೂ ರಾಜಕೀಯ ಅಸೃಶ್ಯತೆ ಎಂದು ಪರಿಗಣಿಸಿಲ್ಲ. ಸಾಮಾಜಿಕ ಹಾ ಗೂ ರಾಜಕೀಯ ಅಸೃಶ್ಯತೆ ಬಗ್ಗೆ ನಂಬಿಕೆಯಿಲ್ಲ. ರಾಷ್ಟ್ರೀಯ ಹಿತದ ಉದ್ದೇಶ ಸಾಧನೆಗೆ ಎಲ್ಲರೊಂದಿಗೆ ಕೈ ಜೋಡಿಸಿಕೊಂಡು ದೇಶದ ಹಿತಕ್ಕಾಗಿ ಜನಿಸಿದÀ ರಾಷ್ಟ್ರೀಯ ಚಳುವಳಿ ಬಿಜೆಪಿ ಪಕ್ಷ ಎಂದರು.

ಒಂದು ವೇಳೆ ದೇಶದಲ್ಲಿ ಬಿಜೆಪಿ ಉದಯಿಸದಿದ್ದಲ್ಲಿ, ಅಂದಿನ ದೇಶದ ಆಡಳಿತವು ಸ್ವಂತ ಹಿತ ಸಾಧನೆ ಗೆ ಪ್ರದೇಶ ಮತ್ತು ಭಾಷೆಯನ್ನು ದುರ್ಬಳಕೆ ಮಾಡಿಕೊಂಡು ರಾಷ್ಟ್ರದ ವಿಂಗಡನೆಗೆ ದಾರಿ ಮಾಡುತ್ತಿದ್ದವು.  ಇಂದು ಭಾಜಪ ರಾಷ್ಟ್ರದ ಏಕತೆ, ಸಂವಿಧಾನದ ಆಶಯ, ಸಂವಿಧಾನ ವಿಚಾರಧಾರೆಗೆ ಬಲತುಂಬಿದೆ. ಅಲ್ಲ ದೇ ಸಂವಿಧಾನ ವಿರೋಧಿ ಕಾಯ್ದೆ ತೆಗೆದು ಹಾಕುವ ಕಾರ್ಯ ಮಾಡಿದೆ ಎಂಧರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‍ಶೆಟ್ಟಿ ದೇಶದ ಅಭಿವೃದ್ದಿ, ಏಕತೆಗಾಗಿ ದುಡಿದಿರುವ ಪಕ್ಷ ಬಿಜೆಪಿ. ಆ ನಿಟ್ಟಿನಲ್ಲಿ ಭಾಜಪ ಉಗಮದ ಕಾರಣಕರ್ತರಾದ ಪ್ರತಿ ನಾಯಕರು ಇಂದಿನ ರಾಜಕೀಯ ಮುಖಂಡರುಗಳಿಗೆ ಸ್ಪೂರ್ತಿಯಾಗಿದ್ದಾರೆ. ಆ ನಿಟ್ಟಿನಲ್ಲಿ ದೇಶದ ಹಿತ ಕಾ ಯುವ ಪಕ್ಷದಲ್ಲಿ ನಾವೆಲ್ಲರೂ ಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಕೋಟೆ ರಂಗನಾಥ್, ಪ್ರೇಮ್‍ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ರವೀಂದ್ರ ಬೆಳವಾಡಿ, ನಗರಾಧ್ಯಕ್ಷ ಪುಷ್ಪರಾಜ್, ಗ್ರಾಮಾಂ ತರ ಮಂಡಲ ಅಧ್ಯಕ್ಷ ವಿಜಯ್‍ಕುಮಾರ್, ಮುಖಂಡರುಗಳಾದ ವೀಣಾಶೆಟ್ಟಿ, ಕವೀಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ