ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಚಾರ್ಮಾಡಿ ಹಾಗು ಸಕಲೇಶಪುರ ದ ಶಿರಾಡಿ ಘಟ್ಟದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯನ್ನು ಹಾನುಬಾಳು ಮುಖಾಂತರ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಯ ಜನ್ನಾಪುರದಿಂದ ಪ್ರಾರಂಭವಾಗಿ ಬೆಟ್ಟದಮನೆ. ಕನ್ನೆಹಳ್ಳಿ ಜಂಕ್ಷನ್ ಮದ್ಯೆ ಮತ್ತು ಅದರ ಜಂಕ್ಷನ್, ಕಿರಗುಂದ ಕುಲುಮೆ ಹತ್ತಿರ ಗುಂಡಿ ಹೋಗಿ ಹೊಂಡ ಆಗಿದೆ. ಹೊಂಡ ಕೆರೆ ಆಗುವ ಮುಂಚೆ ಸದ್ಯಕ್ಕೆ ಅದನ್ನ ಕೆರೆದು ವೆಟ್ ಮಿಕ್ಸ್ ಹಾಕಿ ರಸ್ತೆ ಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ.
ಈ ಬಗ್ಗೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಹಾಗೂ PWD ಇಲಾಖೆ ಅಧಿಕಾರಿಗಳು ಗಮನಹರಿಸಿ ತಕ್ಷಣಕ್ಕೆ ದೊಡ್ಡ ಹೊಂಡಗಳನ್ನು ವೆಟ್ ಮಿಕ್ಸ್ ಹಾಕಿ ಮುಚ್ಚುವ ಕೆಲಸ ಮಾಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
✍️ ಅವರೇಕಾಡು ಪೃಥ್ವಿ


