ಚಿಕ್ಕಮಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಕಡೂರು ತಾಲ್ಲೂಕು ಸಿಂಗಟಗೆರೆಯ ಹರೀಶ್ ಸಿಂಗಟಗೆರೆ ಹಾಗೂ ಉಪಾಧ್ಯಕ್ಷರಾಗಿ ಮೂಡಿಗೆರೆ ತಾಲ್ಲೂಕು ಹೆಸಗೋಡು ಗ್ರಾಮದ ಹೊನ್ನಾಮಕ್ಕಿ ಹೆಚ್.ಬಿ.ವೀರೇಂದ್ರಕುಮಾರ್ ರವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಹರೀಶ್ ಸಿಂಗಟಗೆರೆ ರವರು 2026-28 ನೇ ಸಾಲಿಗೆ ಅಧ್ಯಕ್ಷರಾಗಿ ಚುನಾಯಿತರಾದರು.

ವಕೀಲರುಗಳಾದ ಜಿ.ಹೆಚ್. ಹೇಮಂತ್ ಕುಮಾರ್ ರವರು ಕಾರ್ಯದರ್ಶಿಯಾಗಿ, ಪಾರ್ವತಿಭಾಯಿ ರವರು ಖಜಾಂಚಿಯಾಗಿ ಮತ್ತು ಕೆ.ಸಿ.ವೇದಮೂರ್ತಿ ರವರು ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ವಕೀಲರಾದ ಟಿ.ಸಿ.ಶಿವಶಂಕರ್ ಕಾರ್ಯನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ವಕೀಲರುಗಳಾದ ಡಿ.ಆರ್.ಚರಣ್ ಮತ್ತು ಶರತ್ ಕಾರ್ಯ ನಿರ್ವಹಿಸಿದ್ದರು.
ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ವಕೀಲರ ಸಂಘದ ಸದಸ್ಯರುಗಳು ಅಭಿನಂದಿಸಿದರು.


